ಅವಶ್ಯ ಪ್ರೊಡಕ್ಷನ್ಸ್ ಲಾಂಛನದಲ್ಲಿ ವಿಕೇಶ್ ತಿಮ್ಮರಾಯ ಟಿ ಸ್ವಾಮಿ ನಿರ್ಮಾಣದ ಕಿಲಾಡಿ ಚಿತ್ರದ ಚಿತ್ರೀಕರಣ ನಗರದ ವಿವಿದೆಡೆಗಳಲ್ಲಿ ಹಗಲು ರಾತ್ರಿ ಸಾಗುತ್ತಿದೆ. ಶರಣ್ ಕಪೂರ್ ನಿರ್ದೇಶನದ ಈ ಚಿತ್ರಕ್ಕೆ ಸುನೀಲ್ ಪಟ್ಟಣಗೆರೆ ಕಥೆ ಬರೆದಿದ್ದು, ಚಿತ್ರಕಥೆ-ಸಂಭಾಷಣೆ-ಸಹನಿರ್ದೇಶನ - ಸತೀಶ್ ಕನ್ನಡಿ, ಛಾಯಾಗ್ರಹಣ - ಜೆ.ಟಿ. ಧನು, ಸಂಗೀತ - ಶ್ರೀ ಮಂಜು, ಸಂಕಲನ - ಲಿಂಗರಾಜು, ಕಲೆ - ಥರ್ಮಾಕೋಲ್ ಶ್ರೀನಿವಾಸ್, ಸಾಹಸ - ಡಿಫರೆಂಟ್ ಡ್ಯಾನಿ, ಕೌರವ ವೆಂಕಟೇಶ್, ನೃತ್ಯ - ತ್ರಿಭುವನ್, ಧನು, ಮಹೇಶ್, ಕಂಬಿರಾಜು, ನಿರ್ವಹಣೆ - ಸುದೀಂಧ್ರ ಹೊಸಹಳ್ಳಿ, ತಾರಾಗಣದಲ್ಲಿ - ಸುನಿಲ್, ಉದಯ್, ಸಂಜನಾ ನಾಯ್ಡು, ಶೋಭರಾಜ್, ಬುಲೆಟ್ ಪ್ರಕಾಶ್, ಸಾಧುಕೋಕಿಲ, ವಿಪ್ರ, ತಬಲ ನಾಣಿ, ಯತಿರಾಜ್, ಜಯಶ್ರೀ ಬರಗೂರು, ಕುರಿ ಪ್ರತಾಪ್, ವಿಕೇಶ್, ಗಿರೀಶ್, ಮುಂತಾದವರಿದ್ದಾರೆ.